ಗ್ರಾಮೀಣ ಪರಿಸರದಲ್ಲಿ ಯಕ್ಷಗಾನದ ಕ್ರಾಂತಿ ಮಾಡಿದ ದಿ.ಮಲ್ಯರು ಹವ್ಯಾಸಿ ರಂಗಭೂಮಿಯ ಕ್ರಾಂತಿಪುರುಷರು.
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜನವರಿ 7 , 2014
|
ಜನವರಿ 6, 2014
|
ಗ್ರಾಮೀಣ ಪರಿಸರದಲ್ಲಿ ಯಕ್ಷಗಾನದ ಕ್ರಾಂತಿ ಮಾಡಿದ ದಿ.ಮಲ್ಯರು ಹವ್ಯಾಸಿ ರಂಗಭೂಮಿಯ ಕ್ರಾಂತಿಪುರುಷರು.
ಗಾವಳಿ :
“ಉಡುಪಿ ಜಿಲ್ಲೆಯ ಮೂಲೆ ಮೂಲೆಯ ಹಳ್ಳಿ ಹಳ್ಳಿಗಳಿಗೆ ಹೋಗಿ ಆಸಕ್ತರಿಗೆ ಯಕ್ಷಗಾನದ ವಿವಿದ ಅಂಗಗಳಲ್ಲಿ ತರಬೇತಿ ನೀಡಿ ಹಲವಾರು ಹವ್ಯಾಸಿ ಹಾಗೂ ವ್ರತ್ತಿಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದ ದಿ.ಹಳ್ಳಾಡ್ಡಿ ಸುಬ್ರಾಯ ಮಲ್ಯರ ಸೇವೆ ಗಣನೀಯ. ಬಡಗುತಿಟ್ಟಿನ ಅನೇಕ ಗುರುಗಳಿಗೆ ಗುರುಗಳಾದ ಅವರು ಎಪ್ಪತ್ತರ ದಶಕದ ಯಕ್ಷಗಾನದ ಕ್ರಾಂತಿಪುರುಷ. ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಕಾಲದಲ್ಲಿ ಯುವಕರಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಹುಟ್ಟಿಸಿದ ಮಲ್ಯರ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಅವರ ಶಿಷ್ಯವ್ರಂದದಲ್ಲಿ ಒಬ್ಬರಾದ ಮಣಿಪಾಲ ಎಂ.ಐ.ಟಿ ಪ್ರಾದ್ಯಾಪಕ ಎಸ್.ವಿ.ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಶಿರಿಯಾರ ಗಾವಳಿ ಅಯ್ಯಪ್ಪ ಶಿಬಿರದವರು ಹಮ್ಮಿಕೊಂಡ ಹಳ್ಳಾಡಿ ಸುಬ್ರಾಯ ಮಲ್ಯ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರಾದಾನ ಸಮಾರಂಭದಲ್ಲಿ ದಿ.ಮಲ್ಯರ ಸಂಸ್ಮರಣೆ ಬಾಷಣ ಮಾಡಿದರು.
ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ದರ್ಮದರ್ಶಿ ಬೈಕಾಡಿ ಸುಪ್ರಸಾದ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಸುಬ್ರಾಯ ಮಲ್ಯರ ದರ್ಮಪತ್ನಿಯವರಿಗೆ ನೈಲಾಡಿ ರವಿರಾಜ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಮೀರಾ ವಿ. ಸಾಮಗ ಅವರು ಪ್ರದಾನ ಮಾಡಿ ಶುಭ ಹಾರೈಸಿದರು.
ಪ್ರಶಸ್ತಿಯ ಪ್ರಾಯೋಜಕ ಉದ್ಯಮಿ ರಶ್ವತ್ತ ಕುಮಾರ ಶೆಟ್ಟಿ,ನಾರಾಯಣ ಶಣೈ, ಕೇಶವ ಪ್ರಭು ಗುರುಸ್ವಾಮಿ ವೇದಿಕೆಯಲ್ಲಿ ಉಪಸ್ತಿತರಿದ್ದರು. ಸುಬ್ರಾಯ ಮಲ್ಯರ ದರ್ಮಪತ್ನಿಯವರು ಉಪಸ್ಥಿತರಿದ್ದರು. ಕೇಶವ ಪ್ರಭುಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಶೆಟ್ಟಿ ಸ್ವಾಗತಿಸಿದರು.
|
|
|